ನಿಮಗೆ ಬೆಳೆಯ ಪರಿಹಾರ ಯಾಕೆ ಜಮಾ ಆಗುತ್ತಿಲ್ಲ ತಿಳಿದಿದೆಯೇ…? ಬೆಳೆ ಪರಿಹಾರ ಜಮಾ ಆಗಬೇಕೆಂದರೆ ಹೀಗೆ ಮಾಡಿ….

ಬೆಳೆ ಪರಿಹಾರ ಜಮಾ ಆಗದೇ ಇರಲು ಕಾರಣಗಳೇನು..?


ಬೆಳೆ ಪರಿಹಾರ ಜಮಾ ಆಗದೇ ಇರಲು ಹಲವಾರು ಕಾರಣಗಳಿವೆ ಆ ಕಾರಣಗಳು ಈ ಕೆಳಗಿನಂತೆ ನೋಡೋಣ ಬನ್ನಿ

WhatsApp Group Join Now
Telegram Group Join Now

ಹಲವಾರು ರೈತರು ಬೆಳೆ ಪರಿಹಾರ ಅರ್ಜಿ ಸಲ್ಲಿಸಿದ್ದು ಆದರೆ ತಮ್ಮ ಹೊಲದಲ್ಲಿ ಇರುವ ಬೆಳೆಯ ಜಿಪಿಆರ್ಎಸ್ ಮಾಡದೆ ಇರುವ ಕಾರಣ ಅವರಿಗೆ ಯಾವುದೇ ತರನಾದಂತಹ ಬೆಳೆ ಪರಿಹಾರ ಜಮಾ ಆಗುವುದಿಲ್ಲ…

ಅಲ್ಲದೆ ಹತ್ತು ಹಲವಾರು ರೈತರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಬೇರೆಯಾಗಿದ್ದು ಹಾಗೆಯೇ ಅವರು ಮಾಡಿಸಿದ ಜಿಪಿಆರ್ಎಸ್ ಬೆಳೆ ಬೇರೆಯಾಗಿದ್ದ ಕಾರಣ ಅವರಿಗೂ ಸಹ ಈ ಬಾರಿ ಬೆಳೆ ಪರಿಹಾರ ಬರುವುದಿಲ್ಲ ಎಂದು ತಿಳಿದುಬಂದಿದೆ…

ಇನ್ನು ಹಲವು ರೈತರು ಕೇವಲ ಅರ್ಜಿಯನ್ನು ಸಲ್ಲಿಸಿದ್ದು ಅವರ ಹೊಲದಲ್ಲಿರುವ ಜಿಪಿಆರ್ಎಸ್ ಸರ್ಕಾರದ ವತಿಯಿಂದ ನೇಮಕಗೊಂಡಿರುವ 10 ಹಲವಾರು ಜನರು ಜಿಪಿಆರ್ಎಸ್ ಮಾಡಲಾಗಿದ್ದು ಅವರು ಅವರ ಹೊಲದಲ್ಲಿ ಯಾವುದೇ ತರಹದ ಬೆಳೆ ಇಲ್ಲ ಎಂದು ನಮೂದಿಸಿ ಜಿಪಿಆರ್ಎಸ್ ಮಾಡಿದ್ದಾರೆ…

ಹೀಗೆ ಅನೇಕ ಕಾರಣಗಳಿದ್ದು ಈ ಕಾರಣದಲ್ಲಿ ನೀವು ಯಾವುದಾದರೂ ಒಂದಕ್ಕೆ ಅನುಗುಣವಾಗಿದ್ದರೆ ನಿಮಗೂ ಸಹ ಯಾವುದೇ ತರನಾದಂತಹ ಹಣ ಬರುವುದಿಲ್ಲ…

ಬೆಳೆ ಪರಿಹಾರ ಜಮಾ ಆಗಬೇಕೆಂದರೆ ಏನು ಮಾಡಬೇಕು..?

ಬೆಳೆ ಪರಿಹಾರ ಇನ್ನು ಸ್ವಲ್ಪ ದಿನದಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿದ್ದು ಅದಕ್ಕಿಂತ ಮೊದಲು ನೀವು ನಿಮ್ಮ ಸ್ಟೇಟಸ್ ಅನ್ನು ನೋಡಿಕೊಳ್ಳುವುದು ಉತ್ತಮ ಕರವಾಗಿದೆ..

ಈಗಾಗಲೇ ಜಿಪಿಆರ್ಎಸ್ ಮಾಡಿದಂತಹ ರೈತರ ಅರ್ಜಿಗಳು ಸರಕಾರದ ವತಿಯಿಂದ ಅನುಮೋದನೆ ಅಥವಾ Approval ಪಡೆದುಕೊಂಡಿದ್ದು..

ಇದು ಸರಿಯಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ..

ನಿಮ್ಮ ಸ್ಟೇಟಸ್ ಸರಿಯಾಗಿದೆ ಅಥವಾ ಇಲ್ಲವೋ ಎಂದು ನೋಡಿಕೊಳ್ಳುವುದು ಹೇಗೆ..?

https://play.google.com/store/apps/details?id=com.crop.offcskharif_2021

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಬೆಳೆ ದರ್ಶಕ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ..

ಇದಾದ ನಂತರ ನೀವು ಈ ಆಪ್ ನಲ್ಲಿ ಕೇಳಿರುವಂತಹ ಸಂಪೂರ್ಣ ಮಾಹಿತಿಯನ್ನು ಒದಗಿಸಿದರೆ ನಿಮ್ಮ ಬೆಳೆಯ ಜಿಪಿಆರ್ಎಸ್ ಸರಕಾರದಿಂದ ಅನುಮೋದನೆಗೊಂಡಿದೆಯೋ ಅಥವಾ ಇಲ್ಲವೋ ಹಾಗೆ ಇಲ್ಲಿ ಜಿಪಿಆರ್ಎಸ್ ಆಗಿರುವ ಬೆಳೆ ಹಾಗೂ ನೀವು ಅರ್ಜಿ ಸಲ್ಲಿಸಿರುವ ಬೆಳೆ ಎರಡು ಒಂದಾಗಿದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ…

ನೀವು ಮಾಡಿರುವಂತಹ ಜಿಪಿಆರ್ಎಸ್ ತಪ್ಪಾಗಿದ್ದರೆ ಏನು ಮಾಡಬೇಕು…?

ಹತ್ತು ಹಲವಾರು ರೈತರಿಗೆ ಜಿಪಿಆರ್ಎಸ್ ಬಗ್ಗೆ ಮಾಹಿತಿ ಇಲ್ಲದಿರುವ ಕಾರಣ ಸರ್ಕಾರದವರು ಬೆಳೆ ಸಮೀಕ್ಷೆಯನ್ನು ಮಾಡಿದ್ದು ಅದರಲ್ಲಿ ಬೇರೆ ಬೆಳೆಯ ಸಮೀಕ್ಷೆ ಮಾಡಿದರೆ ಕೂಡಲೇ ನೀವು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಪ್ಪಾಗಿದೆ ಎಂದು ಅವರಿಗೆ ಒಂದು ಅರ್ಜಿಯನ್ನು ನೀಡಿದರೆ ಅವರು ಪರಿಶೀಲನೆ ಮಾಡಿ ಸರಿಯಾಗಿದ್ದರೆ ಮಾತ್ರ ಬೆಳೆ ಪರಿಹಾರ ಜಮಾ ಆಗಲು ಸಹಾಯ ಮಾಡುತ್ತಾರೆ..

ಹೀಗೆ ನೀವು ಸರಿಯಾದ ಮಾಹಿತಿಯನ್ನು ಮೊದಲು ತಿಳಿದುಕೊಂಡು ನಂತರ ಏನು ಮಾಡಬೇಕೆಂಬುದನ್ನು ಈಗಾಗಲೇ ನಾವು ತಿಳಿಸಿಕೊಟ್ಟಿದ್ದೇವೆ ಅದರಂತೆ ಈ ಕ್ರಮಗಳನ್ನು ಪಾಲಿಸಿದ್ದೆ ಆದಲ್ಲಿ ನಿಮಗೆ ಬೆಳೆ ಪರಿಹಾರ ಜಮಾ ಆಗೋದು ಖಂಡಿತ…

ಬೆಳೆ ವಿಮೆಗೆ ಸರಿಯಾದ ಮಾರ್ಗದಲ್ಲಿ ಅರ್ಜಿ ಸಲ್ಲಿಸಿದರು ಕೂಡ ರೈತರಿಗೆ ಬೆಳೆ ವಿಮೆ ಜಮಾ ಆಗುವುದಿಲ್ಲ..

ಕಾರಣ ಕೇಳಿದರೆ ಪ್ರತಿಯೊಬ್ಬರು ಶಾಕ್ ..!

ಈಗಾಗಲೇ ರೈತರು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದು ಹಾಗೆಯೇ ಬೆಳೆಯ ಜಿಪಿಆರ್ಎಸ್ ಮಾಡಿಸಿದ್ದರು ಕೂಡ ಬೆಳೆ ವಿಮೆ ಕೆಲವು ಕಾರಣಗಳಿಂದಾಗಿ ಜಮಾ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ..

ಎಲ್ಲವೂ ಸರಿಯಾಗಿದ್ದರೂ ಸಹ ಬೆಳೆ ವಿಮೆ ಏಕೆ ಜಮಾ ಆಗುವುದಿಲ್ಲ..?

ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ನಂತರ ರೈತರು ಜಿಪಿಆರ್ಎಸ್ ಮಾಡಬೇಕಾಗುತ್ತದೆ ಕೇಂದ್ರ ಸರ್ಕಾರವು ಜಿಲ್ಲೆಗಳಿಗೆ ಅಂದರೆ ತಹಶೀಲ್ದಾರ್ ಅಧಿಕಾರಿ ಯಿಂದ ಒಂದು ಗ್ರಾಮದಲ್ಲಿ ಎಷ್ಟು ಬೆಳೆ ಹಾನಿ ಆಗಿದೆ ಎಂಬುದನ್ನು ಲೆಕ್ಕ ಪತ್ರವನ್ನು ಕೇಳುತ್ತಾರೆ.. ಆಗ ಆ ಅಧಿಕಾರಿಗಳು 50% ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದರೆ ಮಾತ್ರ ಬೆಳೆ ಹಾನಿ ಹಣ ರೈತರ ಖಾತೆಗೆ ಜಮಾ ಆಗುತ್ತದೆ.

ಆದರೆ ಅಧಿಕಾರಿಗಳು ದಾಖಲಾತಿಗಳಲ್ಲಿ ಕೇವಲ 30% ಅಥವಾ 40% ಬೆಳೆಹಾನಿ ಆಗಿದೆ ಎಂದು ಪ್ರಮಾಣ ಪತ್ರಗಳನ್ನು ನೀಡಿದರೆ ಈ ಕಾರಣದಿಂದಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗುವುದಿಲ್ಲ..

ಅದಕ್ಕಾಗಿ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದ್ದರೂ ಕೂಡ ಈ ಮೇಲ್ಕಂಡ ಕಾರಣದಿಂದಾಗಿ ರೈತರ ಖಾತೆಗೆ ಈ ಬಾರಿ ಬೆಳೆ ಪರಿಹಾರದ ಹಣ ಜಮಾ ಆಗುವುದಿಲ್ಲ..

ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ನೋಡಿಕೊಳ್ಳುವುದು ಹೇಗೆ..?


https://www.samrakshane.karnataka.gov.in/CropHome.aspx


ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ನಂಬರ್ ಅನ್ನು ಹಾಕಿ ನಿಮಗೆ ಈ ಬಾರಿ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆಯೋ ಅಥವಾ ಇಲ್ಲವೋ ಎಂದು ತಿಳಿದು ಬರುತ್ತದೆ..

ಹಾಗೆ ತಹಸಿಲ್ದಾರರು ನಿಮ್ಮ ಹೊಲದಲ್ಲಿ ಎಷ್ಟು ಪರ್ಸೆಂಟ್ ಬೆಳೆ ಹಾನಿಯಾಗಿದೆ ಎಂಬುದು ಅವರು ದಾಖಲಾತಿಗಳಲ್ಲಿ ನೀಡಿದ್ದಾರೆ ಎಂಬುದು ಸಹ ನಿಮಗೆ ಅಲ್ಲಿ ತಿಳಿದು ಬರುತ್ತದೆ..

ಅದಕ್ಕಾಗಿ ಈ ಬಾರಿ ಬೆಳೆ ಪರಿಹಾರ ಜಮಾ ಆಗೋಲಿ ಬಾರಿ ಬದಲಾವಣೆಯನ್ನು ತಂದಿದ್ದು ನಿಮಗೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದು ಹೀಗೆ ತಿಳಿದುಕೊಳ್ಳುವುದು ಉತ್ತಮವಾಗಿದೆ.

Leave a Reply

Your email address will not be published. Required fields are marked *