ಐದು ನಿಮಿಷದಲ್ಲಿ ಆಸ್ತಿ ನೋಂದಣಿ…! ಯಾವುದೇ ಸಬ್ ರಿಜಿಸ್ಟರ್ ಆಫೀಸಿಗೆ ಹೋಗದೆ ಕೇವಲ ಆನ್ಲೈನ್ ನಲ್ಲಿ ಆಸ್ತಿ ನೋಂದಣಿ ಹಾಗೆ ಕೊಳ್ಳುವುದು ಮಾರುವುದು ಎಲ್ಲಾ ಆನ್ಲೈನ್ ನಲ್ಲಿ ಸೌಲಭ್ಯವಿದೆ ಹೇಗೆ ಎಂಬುದು ಇಲ್ಲಿದೆ ನೋಡಿ

ಐದು ನಿಮಿಷದಲ್ಲಿ ಆಸ್ತಿ ನೋಂದಣಿ…!

ಯಾವುದೇ ಕಚೇರಿಗೆ ಅಲೆದಾಟವಿಲ್ಲದೆ ಮನೆಯಲ್ಲೇ ಕುಳಿತುಕೊಂಡು ಕೇವಲ ಐದು ನಿಮಿಷದಲ್ಲಿ ಆಸ್ತಿ ನೊಂದಾಯಿಸಿಕೊಳ್ಳಲು ಯೋಜನೆಯನ್ನು ಜಾರಿಗೆ ತಂದ ಸರ್ಕಾರ

WhatsApp Group Join Now
Telegram Group Join Now

ಮಧ್ಯವರ್ತಿಗಳ ಕೆಟ್ಟ ಹಾವಳಿಯಿಂದ ಜನರಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಅರಿತಕೊಂಡ ಸರ್ಕಾರವು ಮಧ್ಯವರ್ತಿಗಳನ್ನು ಅಲ್ಲಗಳಬೇಕೆಂದು ಈ ಯೋಜನೆಯನ್ನು ತಂದಿದ್ದಾರೆ…

ಈ ಯೋಜನೆಯ ಹೆಸರೇನು..?

ಕಾವೇರಿ 2


ಕಂದಾಯದ ಇಲಾಖೆಯ ಮಹತ್ವದ ಘೋಷಣೆ ಕಾವೇರಿ 2 ಇದರ ಉದ್ದೇಶವೇನೆಂದರೆ ಮಧ್ಯವರ್ತಿಗಳನ್ನು ತೆಗೆದು ಹಾಕಿ ಕೇವಲ ರೈತರ ನೇರ ಸಂಪರ್ಕದಿಂದ 5 ನಿಮಿಷದಲ್ಲಿ ಆಸ್ತಿಯ ನೋಂದಣಿಯನ್ನು ಸಂಪೂರ್ಣಗೊಳಿಸಲು ಸಹಾಯವಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ..
ಈಗಿನ ದಿನಗಳಲ್ಲಿ ಹಾಕಿಕೊಳ್ಳುವುದಕ್ಕಿಂತ ನೋಂದಾಯಿಸಿಕೊಳ್ಳುವುದೇ ಬಹುದೊಡ್ಡ ತಲೆನೋವು ಉಂಟಾಗಿತ್ತು. ಅದಕ್ಕಾಗಿ ರಜಿಸ್ಟರ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಕಾವೇರಿ 2 ಎಂಬ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ತಂದಿದೆ…

ಇದಕ್ಕಿಂತ ಮೊದಲು ಕಾವೇರಿ 1 ಎಂಬ ಯೋಜನೆಯದ್ದು ಈ ಯೋಜನಾ ಅಡಿಯಲ್ಲಿ ಮಾರುವವರು ಹಾಗೆಯೇ ಕೊಳ್ಳುವವರು ಕಂದಾಯ ಇಲಾಖೆ ಅಧಿಕಾರಿ ಹತ್ತಿರ ಬಂದು ಸಹಿಯನ್ನು ಮಾಡಬೇಕಾಗಿತ್ತು..
ಆದರೆ ಈ ಯೋಜನಾ ಅಡಿಯಿಂದ ಕೇವಲ ಮೊಬೈಲ್ ನಲ್ಲಿ ತಂತ್ರಾಂಶದ ಮೂಲಕ ಮಾಹಿತಿಯನ್ನು ತುಂಬಿ ನೀವು ನೇರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಆಸ್ತಿ ನೊಂದಣಿ ಕೆಲಸ ಮಾಡಿಕೊಳ್ಳಲು ಸಹಾಯವಾಗುವಂತೆ ಮಾಡಿದ್ದಾರೆ ಯಾವುದೇ ತರಹದ ಮಧ್ಯವರ್ತಿಗಳ ಆಟ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ..

Karnataka


ಪಾರದರ್ಶಕತೆಗೆ ಒತ್ತು ನೀಡುವುದಕ್ಕಾಗಿ ಈ ಹೊಸ ಯೋಜನೆಯನ್ನು ತಂದಿದ್ದು ಈ ಯೋಜನೆಯನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂದು ಸಹ ರಾಜ್ಯ ಸರ್ಕಾರವು ತಿಳಿಸಿದೆ..

ಕಾವೇರಿ 2 ಏನೇನಿದೆ..? ಅಥವಾ ಹೇಗಿರಲಿದೆ..?

1) ಕಾವೇರಿ1.0 ಮುಂದುವರಿದ ಭಾಗವೇ ಕಾವೇರಿ 2

2) ಇದರಲ್ಲಿ ಮೂರು ಭಾಗಗಳಿದ್ದು ನೋಂದಣಿ ಪೂರ್ವ ನೊಂದಣಿ ಕ್ರಮ ನೋಂದಣಿ ನಂತರ ಈ ಮೂರು ಭಾಗಗಳಿವೆ

3) ಆನ್ಲೈನ್ ನಲ್ಲಿ ಆಸ್ತಿ ಖರೀದಿ ಮಾಡುವವರು ಹಾಗೆಯೇ ಮಾರುವವರು ಸಮಗ್ರ ಮಾಹಿತಿಯನ್ನು ನೀಡಬೇಕಾಗುತ್ತದೆ

4) ಎಲ್ಲ ದಾಖಲಾತಿ ಹಾಗೂ ಶುಲ್ಕದ ಹಣವನ್ನು ಪಾವತಿಸಿದರೆ ಆನ್ಲೈನ್ ನಲ್ಲಿ ನೋಂದಣಿ ಕೆಲಸ ಸುಲಭವಾಗಿ ಆಗುತ್ತದೆ.

5) ನಂತರ ನಿಮ್ಮ ಸಮೀಪದ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ನಿಮ್ಮ ಮಾಹಿತಿಯನ್ನು ಒದಗಿಸಬೇಕಾಗುತ್ತದೆ

6) ಬಳಿಕ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿದಾರರಿಗೆ ಕಂದಾಯ ಇಲಾಖೆಯಿಂದ ನೊಂದಣಿ ಪತ್ರ ಸಿಗುತ್ತದೆ

7) ಯಾವುದೇ ತರಹದ ಸರ್ವರ್ ಡೌನ್ ಆಗಬಾರದೆಂದು ಹೊಸ ಕಚೇರಿ ಒಂದನ್ನು ಸೃಷ್ಟಿಸಿ ಸರ್ವರ್ ಡೌನ್ ಆಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ..

ಈ ಆನ್ಲೈನ್ ಕೆಲಸವು ಇನ್ನೂ ಕೇವಲ ಸ್ವಲ್ಪ ದಿನಗಳಲ್ಲಿ ಶುರುವಾಗಲಿದ್ದು ರೈತ ಬಾಂಧವರಿಗೂ ರೈತ ಬಾಂಧವರು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ..

ಹೆಚ್ಚಿನ ಮಾಹಿತಿಗಾಗಿ

ಪಡಿತರ ಚೀಟಿಯ ಬಗ್ಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ….

ಹೊಸ ಪಡಿತರ ಚೀಟಿ ಅರ್ಜಿಗಾಗಿ ಕೊನೆಯ ದಿನಾಂಕವನ್ನು ಮುಂದೂಡಿದ ರಾಜ್ಯ ಸರ್ಕಾರ..

ಈಗಾಗಲೇ ಪಡಿತರ ಚೀಟಿಗಾಗಿ ಹೊಸ ಅರ್ಜಿಯನ್ನು ನಿಲ್ಲಿಸಿದ್ದು ಈಗ ಮತ್ತೊಮ್ಮೆ ಹೊಸ ಪಡಿತರ ಚೀಟಿ ಗಾಗಿ ದಿನಾಂಕವನ್ನು ನಿಗದಿಪಡಿಸಿದೆ..

ಎಲ್ಲಿಯವರೆಗೂ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದು…?

2022 ಡಿಸೆಂಬರ್ 31ರವರೆಗೆ ಹೊಸ ಪಡಿತರ ಚೀಟಿ ಅರ್ಜಿಗಾಗಿ ದಿನಾಂಕವನ್ನು ನಿಗದಿಪಡಿಸಿತ್ತು ಆದರೆ ಈಗ ಹಲವಾರು ಜನ ಅರ್ಜಿಯನ್ನು ಸಲ್ಲಿಸದೆ ಇರುವ ಕಾರಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈಗ ಮತ್ತೊಮ್ಮೆ ದಿನಾಂಕವನ್ನು ಮುಂದುವರಿಸಿದ್ದಾರೆ..

ಜನವರಿ 31- 2023.

ಈ ತಿಂಗಳ ಜನವರಿ 31ನೇ ತಾರೀಖಿನವರೆಗೂ ಹೊಸ ಪಡಿತರ ಚೀಟಿ ಅರ್ಜಿಗಾಗಿ ದಿನಾಂಕವನ್ನು ನಿಗದಿಪಡಿಸಿದ್ದಾರೆ ಹಾಗೆ ಇದಲ್ಲದೆ ಪಡಿತರ ಚೀಟಿಯ ತಿದ್ದುಪಡಿಗಾಗಿಯೂ ಸಹ ಅವಕಾಶವನ್ನು ನೀಡಿದ್ದಾರೆ..

ಎಲ್ಲಿಯವರೆಗೂ ಪಡಿತರ ಚೀಟಿಯನ್ನು ತಿದ್ದಬಹುದು.?

ಜನವರಿ 31 2023ರವರೆಗೂ ಹಳೆಯ ರೇಷನ್ ಕಾರ್ಡ್ ಗಳನ್ನು ತೆಗೆದರೂ ಅವಕಾಶವನ್ನು ನೀಡಲಾಗಿದೆ ಹಲವಾರು ರೇಷನ್ ಕಾರ್ಡ್ ಗಳು ರದ್ದಿಯಾಗಿದ್ದು ರದ್ದುಪಡಿಸಿರುವ ಪಡಿತರ ಚೀಟಿಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ನೀವು ಅವುಗಳನ್ನು ಚಾಲ್ತಿಯಲ್ಲಿ ಮಾಡಿಸಬೇಕಾಗುತ್ತದೆ ಅವಕಾಶವನ್ನು ಕೊಟ್ಟಿದ್ದಾರೆ.
ಈಗಾಗಲೇ ಸಾವಿರಗಟ್ಟಲೆ ಅರ್ಜಿಯನ್ನು ತಿರಸ್ಕರಿಸಿದ್ದು ಹೊಸ ಅರ್ಜಿ ಮತ್ತೊಮ್ಮೆ ನೀವು ಹಾಕಲು ಅವಕಾಶವನ್ನು ನೀಡಿದ್ದಾರೆ..

ತಿದ್ದುಪಡಿಗಾಗಿ ಅವಕಾಶವನ್ನು ನೀಡಿದ್ದು ಯಾವ ಯಾವ ತರಹದ ತಿದ್ದುಪಡಿಗಾಗಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಈ ಕೆಳಗಿನಂತಿವೆ ನೋಡೋಣ ಬನ್ನಿ…

Leave a Reply

Your email address will not be published. Required fields are marked *